ಹಾಸನ, ಏಪ್ರಿಲ್ 22: ಹಾಸನ ತಾಲ್ಲೂಕಿನ ಜೋಡಿಮಲ್ಲಪ್ಪನಳ್ಳಿ ಗ್ರಾಮದ ರೈತ ವೆಂಕಟೇಗೌಡ (48) ಫೈನಾನ್ಸ್ ಕಿರುಕುಳ ಮತ್ತು ಸಾಲದ ಒತ್ತಡ ತಾಳಲಾರದೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೆಂಕಟೇಗೌಡ ಫೈನಾನ್ಸ್ಗಳಿಂದ 3 ಲಕ್ಷ 70 ಸಾವಿರ, ಬ್ಯಾಂಕ್, ವ್ಯವಸಾಯ ಸಹಕಾರ ಸಂಘ, ಧರ್ಮಸ್ಥಳ ಸಂಘ ಮತ್ತು ಕೈಸಾಲ ಸೇರಿ 3 ಲಕ್ಷ 90 ಸಾವಿರ, ಒಟ್ಟು 7 ಲಕ್ಷ 60 ಸಾವಿರ ರೂ. ಸಾಲ ಮಾಡಿದ್ದರು.
ಸಾಲದ ಹಣವನ್ನು ಪಾವತಿಸುವಂತೆ ಫೈನಾನ್ಸ್ ಸಂಸ್ಥೆಗಳಿಂದ ನಿರಂತರ ಕಿರುಕುಳಕ್ಕೊಳಗಾಗಿದ್ದ ಆರೋಪವಿದೆ. ಇದರಿಂದ ಮನನೊಂದು ಅವರು ಈ ಕೃತ್ಯಕ್ಕೆ ಶರಣಾಗಿದ್ದಾರೆ. ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.