ಮಂಗಳೂರು ಪೊಲೀಸ್ ಆಯುಕ್ತ, ದ.ಕ. ಎಸ್ಪಿ ಎತ್ತಂಗಡಿ: ಸುಧೀರ್ ರೆಡ್ಡಿ ಹೊಸ ಕಮಿಷನರ್, ಡಾ.ಕೆ.ಅರುಣ್ ಎಸ್ಪಿಯಾಗಿ ನೇಮಕ, ಉಡುಪಿಗೆ ಹರಿರಾಂ ಶಂಕರ್

ಬೆಂಗಳೂರು, ಮೇ 29: ಕೊಲೆ, ಪ್ರತೀಕಾರದ ಕೊಲೆಗಳಿಂದ ಕಾನೂನು-ಸುವ್ಯವಸ್ಥೆ ಹದಗೆಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಮಂಗಳೂರು ‌ನಗರ ಆಯುಕ್ತ ಹಾಗೂ ದಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಸುಧೀಂದ್ರ ಕುಮಾರ್ ರೆಡ್ಡಿ

 ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪ್ ಅಗರ್ವಾಲ್ ಅವರನ್ನು ವರ್ಗಾವಣೆ ಮಾಡಿದ್ದು ಅವರ ಜಾಗಕ್ಕೆ ಗುಪ್ತಚರ ವಿಭಾಗದ ಡಿಐಜಿ  ಸುಧೀರ್ ರೆಡ್ಡಿ ಅವರನ್ನು ನೇಮಕ ಮಾಡಿದೆ. ಇದಲ್ಲದೆ ಒಟ್ಟ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆ ಆದೇಶ

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ಕೆ.ಅರುಣ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿದ್ದು, ಅಲ್ಲಿನ ಎಸ್ಪಿ ಎನ್.ಯತೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಗುಪ್ತಚರ ವಿಭಾಗದ ಎಸ್ಪಿ ಹರಿರಾಂ ಶಂಕರ್ ಅವರನ್ನು ನೇಮಕ ಮಾಡಲಾಗಿದೆ.