ಪ್ರಜ್ವಲ್ ರೇವಣ್ಣ ಪರ ಘೋಷಣೆ ಕೂಗಿದ ಬೆಂಬಲಿಗರು: ಮಹಜರ್ ಮುಗಿಸಿ ಭದ್ರತೆಯಲ್ಲಿ ಪ್ರಜ್ವಲ್ ಕರೆದೊಯ್ದ ಎಸ್ಐಟಿ ತಂಡ

ಹಾಸನ: ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಎಸ್ಐಟಿ ಅಧಿಕಾರಿಗಳು ಹೇಳಿಕೆ ಪಡೆದು ಪ್ರಜ್ವಲ್‌ರೇವಣ್ಣ ಅವರನ್ನು ವಾಪಸ್ ಬೆಂಗಳೂರಿಗೆ ಕರೆದೊಯ್ದರು.

ನಾಲ್ಕು ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು ನಡೆಸಿದ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ತಂಡ
ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮನೆಯಿಂದ ತೆರಳಿದವು.

ಹೊಳೆನರಸೀಪುರದ ರೇವಣ್ಣ ನಿವಾಸದೆದೆರು ಜಮಾಯಿಸಿದ ಜೆಡಿಎಸ್‌ ಕಾರ್ಯಕರ್ತರು, ಪ್ರಜ್ವಲ್‌ ರೇವಣ್ಣ, ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಹಾಗೂ ಪರ ಘೋಷಣೆ ಕೂಗಿದರು.