ವಲಸಿಗ ಕಾರ್ಮಿಕರ ಪತ್ತೆಗೆ ಪೊಲೀಸರ ಐಡಿ, ಫೋಟೋ ಸಂಗ್ರಹ ಅಸ್ತ್ರ: ಅರೇಹಳ್ಳಿ ಠಾಣೆಯಲ್ಲಿ ನಾಳೆ ಸಭೆ

ಹಾಸನ: ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ಮಲೆನಾಡಿನಲ್ಲಿ ಬೇರು ಬಿಡುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಪ್ರಥಮ ಹೆಜ್ಜೆ ಇರಿಸಿದ್ದು, ನ.11ರಂದು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ತೋಟ ಹಾಗೂ ಬಾಡಿಗೆ ಮನೆಗಳ ಮಾಲೀಕರ ಸಭೆ ಆಯೋಜಿಸಲಾಗಿದೆ.

ಈ ಸಂಬಂಧ ಅರೇಹಳ್ಳಿ ಠಾಣೆಯಿಂದ ಹೊರಡಿಸಿರುವ ಸೂಚನಾ ಪತ್ರ ಹೀಗಿದೆ:
ಈ ಮೂಲಕ ಆರೇಹಳ್ಳಿ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊರ ರಾಜ್ಯಗಳಿಂದ ಬಂದ ಕಾರ್ಮಿಕರಿಗೆ ವಸತಿ ಮತ್ತು ಕೆಲಸ ನೀಡಿರುವ ತೋಟದ ಮಾಲೀಕರು ಹಾಗೂ ಬಾಡಿಗೆ ಮನೆ ನೀಡಿರುವ ಮಾಲೀಕರು ನವೆಂಬರ್ 11 ರಂದು ಬೆಳಗ್ಗೆ 11 ಗಂಟೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಿರುವ ಸಭೆಗೆ ಆಗಮಿಸಬೇಕು.

ವಲಸೆ ಕಾರ್ಮಿಕರ ಪ್ರತಿ ಕುಟುಂಬದ 4×6 (ಪೋಸ್ಟ್ ಕಾರ್ಡ್) ಅಳತೆಯ ಭಾವಚಿತ್ರ ಮತ್ತು ಅವರ ಆಧಾರ್ ಕಾರ್ಡ್ ನಕಲು, ಮೊಬೈಲ್ ಸಂಖ್ಯೆಯೊಂದಿಗೆ ಸಲ್ಲಿಸಬೇಕು. ಇಲ್ಲವಾದರೆ ಮುಂದಿನ ಆಗು-ಹೋಗುಗಳಿಗೆ ನೀವೇ ಜವಾಬ್ದಾರರು ಎಂದು ಪಿಎಸ್ಐ ಎಚ್ಚರಿಕೆ ನೀಡಿದ್ದಾರೆ.