ಹಾಸನ, ಮೇ 02: ಬೇಲೂರು ತಾಲ್ಲೂಕಿನ ಹಗರೆ ಗ್ರಾಮದಲ್ಲಿ ಚಿರತೆಯೊಂದು ಮನೆಯ ಆವರಣಕ್ಕೆ ನುಗ್ಗಿ, ಕೃಷ್ಣಮೂರ್ತಿ ಎಂಬ ಗ್ರಾಮಸ್ಥರ ಮುಧೋಳ ನಾಯಿಯನ್ನು ಕೊಂದು ಹೊತ್ತೊಯ್ದ ಘಟನೆ ನಿನ್ನೆ ರಾತ್ರಿ 1.25ರ ಸುಮಾರಿಗೆ ನಡೆದಿದೆ.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕೇವಲ 100 ಅಡಿ ದೂರದಲ್ಲಿರುವ ಕೃಷ್ಣಮೂರ್ತಿ ಅವರ ನಿವಾಸದಲ್ಲಿ ಈ ಘಟನೆ ಸಂಭವಿಸಿದೆ.

ಚಿರತೆಯು ಮನೆಯ ಆವರಣದಲ್ಲಿದ್ದ ನಾಯಿಯನ್ನು ದಾಳಿ ಮಾಡಿ ಕೊಂದು, ಅದನ್ನು ಹೊತ್ತೊಯ್ದ ದೃಶ್ಯ ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಗರೆ ಗ್ರಾಮವು ಸುತ್ತಮುತ್ತಲಿನ ಅರಣ್ಯ ಪ್ರದೇಶದಿಂದ ಸುತ್ತುವರೆದಿದ್ದು, ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮನವಿ ಮಾಡಿದ್ದು, ಚಿರತೆಯನ್ನು ಸೆರೆಹಿಡಿಯಲು ಬೋನ್ ಇಡುವಂತೆ ಒತ್ತಾಯಿಸಿದ್ದಾರೆ.