ಮಾ.23-24 ರಂದು ಹೆತ್ತೂರಿನಲ್ಲಿ 22ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಸಮ್ಮೇಳಾಧ್ಯಕ್ಷರಾಗಿ ಖ್ಯಾತ ಲೇಖಕಿ ಶೈಲಜಾ ಹಾಸನ್ ಸರ್ವಾನುಮತದ ಆಯ್ಕೆ

ಹಾಸನ: ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಕಲೇಶಪುರ ತಾಲ್ಲೂಕು ಹೆತ್ತೂರಿನಲ್ಲಿ ಮಾರ್ಚ್ 23 ಮತ್ತು 24 ರಂದು ಆಯೋಜನೆಯಾಗಿದ್ದು. ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಶೈಲಜಾ ಹಾಸನ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಲಾಗಿದೆ.

ಸಕಲೇಶಪುರದ ಸೊಸೆಗೆ ಸಮ್ಮೇಳನಾಧ್ಯಕ್ಷರ ಪಟ್ಟ:
ಶೈಲಜಾ ಹಾಸನ್, ನಾಡಿನ ಮುಂಚೂಣಿ ಲೇಖಕಿಯರಲ್ಲಿ ಪ್ರಮುಖರು. ಹಾಸನದ ನಂಜುಂಡ ಶೆಟ್ರು ಮತ್ತು ಶಾರದಮ್ಮ ಅವರ ಏಕೈಕ ಪುತ್ರಿಯಾಗಿರುವ ಇವರು, 1998 ರಲ್ಲಿ ಸಕಲೇಶಪುರ ತಾಲ್ಲೂಕಿನ ಜಂಬರಡಿ ಗ್ರಾಮದ ಗಂಗಾಧರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪ್ರಸ್ತುತ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಮ್ಮೇಳನಾಧ್ಯಕ್ಷರ ಪರಿಚಯ:
ಪರಿಚಯ: ಹೆಸರು: ಎನ್. ಶೈಲಜಾ ಹಾಸನ
ಶಿಕ್ಷಣ: ಎಂ.ಎ ,ಬಿಎಡ್
ವೃತ್ತಿ: ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ, ಶಾಂತಿಗ್ರಾಮ
ಎನ್.ಶೈಲಜಾ ಹಾಸನ ರಾಜ್ಯದ ಕರುನಾಡಿನ ಪ್ರಮುಖ ಕಾದಂಬರಿ ಗಾರ್ತಿಯಾಗಿದ್ದು, ಇವರ ಅನೇಕ ಕಾದಂಬರಿಗಳು ಸುಧಾ, ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಓದುಗರನ್ನು ಯಶಸ್ವಿಯಾಗಿ ತಲುಪಿ ಅಪಾರ ಮೆಚ್ಚುಗೆ ಪಡೆದಿವೆ. ಕಥಾಸಂಕಲನ, ಕಾದಂಬರಿ, ಲೇಖನಗಳ ಸಂಕಲನ, ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 25 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿವೆ. ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.

ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃಧ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ, ಸಾವಯುವ ಕೃಷಿ, ಅದರ ಮಹತ್ವ, ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ಸಮಸ್ಯೆಗಳು, ಮಾನಸಿಕ ಅಸ್ವಸ್ಥರ ಬಗ್ಗೆ, ಹೆಣ್ಣು ಮಕ್ಕಳ ಶಿಕ್ಷಣ, ಭ್ರೂಣಹತ್ಯೆ ಯಂತಹ ಪ್ರಸ್ತುತ ವಿಚಾರದ ಬಗ್ಗೆ, ಸರಳ ವಿವಾಹ, ಹೆಣ್ಣು ಮಕ್ಕಳ ಸಬಲೀಕರಣ , ಮಂಗಳ ಮುಖಿಯರ ಬದುಕು ಹೀಗೆ ಹಲವಾರು ಗಂಭೀರ ವಿಚಾರಗಳ ಬಗ್ಗೆ ಕಾದಂಬರಿಯ ವಸ್ತುವಾಗಿಸಿ ಬರೆದಿರುವ ಶೈಲಜಾ ಹಾಸನ ಅವರ ಸಾಹಿತ್ಯ, ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಕೃತಿಗಳು:
1.ಚಿಲ್ಲರೆ ಪುರಾಣ (ಹಾಸ್ಯ ಸಂಕಲನ)
2. ಮತ್ತೊಂದು ಅಂಗಳ (ಕಥಾ ಸಂಕಲನ
3. ಬೊಗಸೆಯೊಳಗಿನ ಬಿಂದು (ಕವನ ಸಂಕಲನ)
4. ಮಂಥನ (ಕಾದಂಬರಿ)
5.ಶಿಕ್ಷಣದತ್ತ ಒಂದು ನೋಟ( ಲೇಖನಗಳು)
6.ಮುಸ್ಸಂಜೆಯ ಮಿಂಚು (ತರಂಗ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾದ ಕಾದಂಬರಿ)
7.ಇಳಾ (ಸುಧಾಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾದ ಕಾದಂಬರಿ)
9. ದರ್ಪಣ (ಕಥಾಸಂಕಲನ)
10.ಮೌನ ಮೀರಿದ ಹೊತ್ತು( ಅಂಕಣ ಬರಹಗಳ ಸಂಕಲನಗಳು)
11.ಮೋಹ (ಸುಧಾಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾದ ಕಾದಂಬರಿ)
12. ಮಕ್ಕಳ ಕಥಾಗುಚ್ಛ (ಸಂಪಾದಿತ ಸಂಕಲನ)
13.ಹಿಂದಿನ ಬೆಂಚಿನ ಹುಡುಗಿಯರು (ಕಥಾ ಸಂಕಲನ)
14. ಏನೊದಾಹ ಏನೊಮೋಹ( ಸುಧಾ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾದ ಕಾದಂಬರಿ)
15.ಬದುಕಿನ ಬೊಗಸೆಯೊಳಗೆ(ಅಂಕಣ ಬರಹಗಳ ಸಂಗ್ರಹ)
16.ಅಂತರ (ಕಾದಂಬರಿ)
17.ಸಿನಿಮಾ ಟಾಕೀಸು (ಪ್ರಬಂಧಗಳ ಸಂಕಲನ)
18.ಸವಾರಿಗಳು (ಪ್ರಬಂಧಗಳ ಸಂಕಲನ)
19. ನಕ್ಸಲೈಟ್ (ಕಥಾಸಂಕಲನ)
20. ಹೋರಾಟದ ಹಾದಿಯಲ್ಲಿ ಬೆಳ್ಳಿಹೆಜ್ಜೆ (ಸಂಪಾದಿತ ಕೃತಿ)
22.ಮಕ್ಕಳ ಸಾಹಿತ್ಯ (ಸಂಪಾದಿತ ಕೃತಿ)
23.ನೆರೆಹೊರೆ(ಲೇಖನಗಳು ಸಂಗ್ರಹ)
24. ಗಂಗೆಯ ದಡದಲಿ (ಪ್ರವಾಸ ಕಥನ)
25. ನಿಲ್ಲುನಿಲ್ಲೆ ಪತಂಗ( ಕಥಾ ಸಂಕಲನ)
26.ಹೊಸಬೆಳಗು (ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟ ಗೊಂಡ ಕಾದಂಬರಿ) ಅಚ್ಚಿನಲ್ಲಿ

ಪ್ರಶಸ್ತಿಗಳು:
1. ತ್ರೀವೇಣಿ ಸಾಹಿತ್ಯ ಪ್ರಶಸ್ತಿ ಮೋಹ ಕಾದಂಬರಿಗೆ ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು.
1.ಭಾರತಿ ರಾಜರಾವ್ಮಧ್ಯಸ್ತ ದತ್ತಿ ಪ್ರಶಸ್ತಿ( ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು)
2. ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಬೆಂಗಳೂರು.
3.ಮಾಳಗಿ ಮಾಲತೇಶ್ವರ ಪ್ರಶಸ್ತಿ, ಹಾವೇರಿ.
4.ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, ಬೆಂಗಳೂರು.
5.ಗೌರಿ ರಾಮಯ್ಯ ದತ್ತಿಪ್ರಶಸ್ತಿ (ಭಾರತೀಯ ಕರ್ನಾಟಕ ಸಂಘ, ಬೆಂಗಳೂರು)
6.ಉಮಾದೇವಿ ಶಂಕರರಾವ್ ದತ್ತಿ ಬಹುಮಾನ( ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು)
7. ರಾಘವೇಂದ್ರ ಪ್ರಕಾಶನ, ಅಂಕೋಲ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಬಹುಮಾನ.
8. ಮಲ್ಲಿಗೆ ಕಥಾ ಬಹುಮಾನ.
9. ಈ ಭಾನುವಾರ ಪತ್ರಿಕೆಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಬಹುಮಾನ.
10. ಲೇಖಕಿಯರ ಟ್ರಸ್ಟ್‍ ಮೈಸೂರು, ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
11. ಕರ್ನಾಟಕ ಲೇಖಕಿಯರ ಸಂಘದ ಉಮಾದೇವಿ ಶಂಕರರಾವ್‍ ದತ್ತಿ ಬಹುಮಾನ ನಕ್ಸಲೈಟ್ ಕಥೆಗೆ.
12.ರಾಮಸ್ವಾಮಿಅಯ್ಯಂಗಾರ್ ಸಾಹಿತ್ಯಪ್ರಶಸ್ತಿ, ಸಾಹಿತ್ಯ ಪರಿಷತ್ತು, ಹಾಸನ.
13. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಬೆಂಗಳೂರು. ಮೌನಮೀರಿದ ಹೊತ್ತು ಕೃತಿಗೆ
14.ಅನನ್ಯ ಪ್ರಕಾಶನ ಪುಸ್ತಕ ಪ್ರಶಸ್ತಿ, ಬೆಂಗಳೂರು. ಏನುಮೋಹ ಯಾವದಾಹ ಕೃತಿಗೆ.
15.ಡಾ:ಕರೀಂಖಾನ್ ಸಾಹಿತ್ಯಪ್ರಶಸ್ತಿ, ಕೇಂದ್ರ ಸಾಹಿತ್ಯ ವೇದಿಕೆ , ಬೆಂಗಳೂರು.
16. ಗೊರೂರು ರಾಮಸ್ವಾಮಿ ಅಯ್ಯಂಗಾರ್‍ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಪರಿಷತ್ತು, ಹಾಸನ.
17.ಬಂದಮ್ಮ ಸಿದ್ದರಾಮಯ್ಯ ಸಾಹಿತ್ಯದತ್ತಿ ಪ್ರಶಸ್ತಿ, ಜಿಲ್ಲಾ ಲೇಖಕಿಯರ ಬಳಗ, ಹಾಸನ.
18. ಕನ್ನಡರತ್ನ ಪ್ರಶಸ್ತಿ ,ವಚನ ಸಾಹಿತ್ಯ ಪರಿಷತ್ತು, ಬೆಂಗಳೂರು.
19. ವಿಶಿಷ್ಟಲೇಖಕಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು.
20.ಸಾಹಿತ್ಯ ಶ್ರೀ ಪ್ರಶಸ್ತಿ, ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆ, ರಾಯಚೂರು.
21.ಸಂಜೆ ಸಾಹಿತ್ಯ ಪ್ರಶಸ್ತಿ, ಜಿವಾಜಿ ಮೆಹಂದಳೆ, ಬೆಂಗಳೂರು ನಿಲ್ಲು ನಿಲ್ಲೆ ಪತಂಗ ಕೃತಿಗೆ