ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಇಂದಿನಿಂದ ಮತ್ತೆ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಮುಂದಿನ 5 ದಿನಗಳಲ್ಲಿ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಕೆಲವೆಡೆ ಇಂದು ಭಾರಿ ಮಳೆಯಾಗಬಹುದು.

ಪ್ರದೇಶವಾರು ಮಳೆ ಮುನ್ಸೂಚನೆ:

ದಕ್ಷಿಣ ಒಳನಾಡು: ಚದುರಿದ ಸಾಧಾರಣ ಮಳೆಯ ಜೊತೆಗೆ ಕೆಲವೆಡೆ ದಟ್ಟ ಮಂಜು ಮುಸುಕಿನ ವಾತಾವರಣ.

ಕರಾವಳಿ ಮತ್ತು ಮಲೆನಾಡು: ಸಾಧಾರಣ ಮಳೆಯ ಸಾಧ್ಯತೆ.

ಉತ್ತರ ಒಳನಾಡು: ಒಣ ಹವೆಯಿರುವ ಸಾಧ್ಯತೆ.

ವಾಯುಭಾರ ಕುಸಿತ ಎಫೆಕ್ಟ್;
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತವು ಮಳೆ ಮತ್ತು ಮಂಜು ಮುಸುಕಿನ ಪ್ರಭಾವವನ್ನು ಹೆಚ್ಚಿಸಿದೆ.