ಹಾಸನ: ರಾಜ್ಯ ಸರ್ಕಾರದ ಸಮಗ್ರ ಜಾತಿ ಗಣತಿ ಯೋಜನೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದ ಗಣತಿ ಜವಾಬ್ದಾರಿ ಹೊತ್ತು ಮನೆ ಮನೆ ಸುತ್ತುತ್ತಿರುವ ಶಿಕ್ಷಕರು ಹೈರಾಣಾಗಿ ಹೋಗಿದ್ದಾರೆ. ಪದೇ ಪದೆ ಕೈಕೊಡುವ ಸರ್ವರ್, ಆ್ಯಪ್ ಕ್ರಾಷ್ ಗಳಿಂದ ದಿನಕ್ಕೆ ಎರಡ್ಮೂರು ಕುಟುಂಬಗಳ ಸಂದರ್ಶನ ಮುಗಿಸಲೂ ಪರದಾಡುತ್ತಿದ್ದಾರೆ.
ಗಣತಿ ಯೋಜನೆಯ ಹಿನ್ನೆಲೆ
ಕರ್ನಾಟಕ ಸರ್ಕಾರವು 2025ರಲ್ಲಿ ಪರಿಶಿಷ್ಟ ಜಾತಿಗಳ (SC) ಒಳಮೀಸಲಾತಿ ಮತ್ತು ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವ ಉದ್ದೇಶದಿಂದ ಸಮಗ್ರ ಜಾತಿ ಗಣತಿ ಯೋಜನೆಯನ್ನು ಜಾರಿಗೆ ತಂದಿದೆ. ಜಸ್ಟೀಸ್ ಎಚ್. ಎನ್. ನಾಗಮೋಹನ್ ದಾಸ್ ಅವರ ಶಿಫಾರಸುಗಳ ಆಧಾರದ ಮೇಲೆ ಈ ಸಮೀಕ್ಷೆಯನ್ನು ಆರಂಭಿಸಲಾಗಿದೆ.
ಮೇ 5, 2025ರಿಂದ ಆರಂಭಗೊಂಡ ಈ ಗಣತಿಯು ಮೂರು ಹಂತಗಳಲ್ಲಿ ಮೇ 23, 2025ರವರೆಗೆ ನಡೆಯಲಿದೆ. ಈ ಯೋಜನೆಯ ಗುರಿಯು ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ನಿಖರವಾದ ವೈಜ್ಞಾನಿಕ ದತ್ತಾಂಶವನ್ನು ಕಲೆಹಾಕಿ, ಒಳಮೀಸಲಾತಿ ವರ್ಗೀಕರಣ ಮತ್ತು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವುದಾಗಿದೆ. ಈ ಯೋಜನೆಯಡಿ, ಮೂಲ ಜಾತಿ, ಉಪಜಾತಿ, ಶಿಕ್ಷಣ, ಆದಾಯ, ಉದ್ಯೋಗ ಮತ್ತು ಇತರ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಲು ಗಣತಿದಾರರು ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ.
ಈ ಗಣತಿಯಲ್ಲಿ ಪರಿಶಿಷ್ಟ ಜಾತಿಯವರು ತಮ್ಮ ಜಾತಿ, ಉಪಜಾತಿ ಮತ್ತು ಇತರ ವಿವರಗಳನ್ನು ನೀಡುವ ಮೂಲಕ ಸಹಕರಿಸಬೇಕೆಂದು ಸರ್ಕಾರ ಮನವಿ ಮಾಡಿದೆ.
ಡಿಜಿಟಲ್ ತಂತ್ರಜ್ಞಾನ ಮತ್ತು ಆ್ಯಪ್ ಬಳಕೆ
ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದ್ದು, ಗಣತಿದಾರರು ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆದರೆ, ಈ ಆ್ಯಪ್ನ ಸರ್ವೆ ಸಮಸ್ಯೆಗಳು ಗಣತಿದಾರರನ್ನು ಸುಸ್ತು ಮಾಡಿ ಹಾಕುತ್ತಿವೆ.
ಗಣತಿದಾರರ ಆ್ಯಪ್ನ ಪ್ರಮುಖ ಸಮಸ್ಯೆಗಳು
- ತಾಂತ್ರಿಕ ದೋಷಗಳು ಮತ್ತು ಆ್ಯಪ್ ಕ್ರ್ಯಾಶ್
ಆ್ಯಪ್ ಆಗಾಗ ಕ್ರ್ಯಾಶ್ ಆಗುತ್ತಿದ್ದು, ಗಣತಿದಾರರು ಸಂಗ್ರಹಿಸಿದ ಡೇಟಾವನ್ನು ಸೇವ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಾಹಿತಿಯನ್ನು ಮತ್ತೆ ಸಂಗ್ರಹಿಸಬೇಕಾದ ಸ್ಥಿತಿ ಎದುರಾಗಿದೆ. @TheFederal_KA ಎಂಬ X ಬಳಕೆದಾರರ ಪೋಸ್ಟ್ನಲ್ಲಿ ಈ ಬೇಸರ ಉಲ್ಲೇಖವಾಗಿದೆ. - ಆ್ಯಪ್ ಅಪ್ಡೇಟ್ನ ಕೊರತೆ
ಇತ್ತೀಚಿನ ಅಪ್ಡೇಟ್ ಇನ್ನೂ ಲಭ್ಯವಿಲ್ಲದ ಕಾರಣ, ಕೆಲವು ಅಗತ್ಯ ಫೀಚರ್ಗಳು ಕಾರ್ಯನಿರ್ವಹಿಸುತ್ತಿಲ್ಲ. ಉದಾಹರಣೆಗೆ, ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಇಲ್ಲದವರ ಮಾಹಿತಿಯನ್ನು ಸೇರಿಸಲು ವ್ಯವಸ್ಥೆ ಇಲ್ಲ. @VenugopalMaurya ಎಂಬ X ಬಳಕೆದಾರರು ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ. - ಡೇಟಾಬೇಸ್ ಸಿಂಕ್ ಸಮಸ್ಯೆ
ಆ್ಯಪ್ನಿಂದ ಸಂಗ್ರಹಿಸಿದ ಡೇಟಾವನ್ನು ಕೇಂದ್ರೀಯ ಡೇಟಾಬೇಸ್ಗೆ ಸಿಂಕ್ ಮಾಡುವಲ್ಲಿ ವಿಳಂಬವಾಗುತ್ತಿದೆ. ಇಂಟರ್ನೆಟ್ ಸಂಪರ್ಕದ ಕೊರತೆಯೂ ಈ ಸಮಸ್ಯೆಗೆ ಕಾರಣವಾಗಿದೆ. - ಬಳಕೆದಾರ ಸ್ನೇಹಿಯಲ್ಲದ ಇಂಟರ್ಫೇಸ್
ಆ್ಯಪ್ನ ಬಳಕೆ ಇಂಟರ್ಫೇಸ್ ಸಂಕೀರ್ಣವಾಗಿದ್ದು, ತಾಂತ್ರಿಕ ಜ್ಞಾನ ಕಡಿಮೆ ಇರುವ ಗಣತಿದಾರರಿಗೆ ಇದು ತೊಂದರೆಯಾಗಿದೆ. ತರಬೇತಿಯ ಕೊರತೆಯಿಂದ ಸಮಸ್ಯೆ ಉಲ್ಬಣಗೊಂಡಿದೆ. - ವಿಶೇಷ ಸಂದರ್ಭಗಳಿಗೆ ವ್ಯವಸ್ಥೆಯ ಕೊರತೆ
ಆಧಾರ್ ಕಾರ್ಡ್ ಇಲ್ಲದ ಮಕ್ಕಳು ಅಥವಾ ರೇಷನ್ ಕಾರ್ಡ್ ಇಲ್ಲದ ಕುಟುಂಬಗಳ ಮಾಹಿತಿಯನ್ನು ದಾಖಲಿಸಲು ಸೂಕ್ತ ಆಯ್ಕೆಗಳಿಲ್ಲ. ಇದು ಸಮಗ್ರ ವರದಿಗೆ ಧಕ್ಕೆಯಾಗುವ ಸಾಧ್ಯತೆ ಇದೆ.
ಗಣತಿದಾರರ ಒತ್ತಡ ಮತ್ತು ಸವಾಲುಗಳು
ಗಣತಿದಾರರು, ಮುಖ್ಯವಾಗಿ ಶಿಕ್ಷಕರು ಮತ್ತು ಸರ್ಕಾರಿ ನೌಕರರು, ಈ ಗಣತಿಯಲ್ಲಿ ಕಡ್ಡಾಯವಾಗಿ ಭಾಗವಹಿಸುತ್ತಿದ್ದಾರೆ. ಆದರೆ ತಾಂತ್ರಿಕ ದೋಷಗಳಿಂದಾಗಿ ಅವರು ತೀವ್ರ ಒತ್ತಡದಲ್ಲಿದ್ದಾರೆ. ಕೆಲವು ಗಣತಿದಾರರು ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ತೊಂದರೆಗಳು ಅವರ ಕೆಲಸದ ದಕ್ಷತೆಯ ಮೇಲೆ ಪರಿಣಾಮ ಬೀರುತ್ತಿವೆ.
ಇದರೊಂದಿಗೆ, ಆ್ಯಪ್ ಬಳಸಲು ನೀಡಲಾದ ತರಬೇತಿ ಸೀಮಿತವಾಗಿದ್ದು, ಕಾರ್ಯಕ್ಷೇತ್ರದಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದೆ. ತಾಂತ್ರಿಕ ಬೆಂಬಲದ ಕೊರತೆಯೂ ಸಮಸ್ಯೆಯನ್ನು ಹೆಚ್ಚಿಸಿದೆ.
ಇದ್ದಕ್ಕಿದ್ದಂತೆ ಆ್ಯಪ್ ಕ್ರಾಶ್ ಆಗಿ ಆವರೆಗೂ ಮಾಡಿದ ಎಲ್ಲ ಡೇಟಾ ನಾಶವಾಗುತ್ತದೆ. ಎಲ್ಲ ಮಾಹಿತಿಯನ್ನು ಪುನಃ ಭರ್ತಿ ಮಾಡಲು ಅರ್ಧ ಗಂಟೆ ಬೇಕಾಗುತ್ತದೆ. ಸರ್ವರ್ ಆಗಾಗ್ಗೆ ಡೌನ್ ಆಗುವುದರಿಂದ ಕೆಲವೊಮ್ಮೆ ಮನೆ ಬಾಗಿಲುಗಳಲ್ಲಿ ಗಂಟೆಗಟ್ಟಲೆ ಕಾಯುತ್ತಾ ಬಿಸಿಲಿನಲ್ಲಿ ಬಸವಳಿಯಬೇಕಾಗುತ್ತಿದೆ. ದಿನಕ್ಕೆ ಒಂದೆರಡು ಮನೆ ಸಮೀಕ್ಷೆ ಅಪ್ಲೋಡ್ ಸಕ್ಸಸ್ ಆದರೆ ಪುಣ್ಯ ಎನ್ನುವಂತಾಗಿದೆ. ನಮ್ಮ ಸಮಸ್ಯೆ ಕೇಳುವವರೇ ಇಲ್ಲವಾಗಿದ್ದಾರೆ.
-ಹೆಸರು ಹೇಳಲಿಚ್ಛಿಸದ ಗಣತಿದಾರ