ಚನ್ನರಾಯಪಟ್ಟಣ; ಕಲಸಿಂದ ಪಿಎಸಿಸಿಎಸ್ ಗೆ ಬಿ.ಎನ್.ಸ್ವಾಮಿ ಅಧ್ಯಕ್ಷ

ಚನ್ನರಾಯಪಟ್ಟಣ: ತಾಲ್ಲೂಕಿನ ಕಸಬಾ ಹೋಬಳಿ ಕಲಸಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎನ್.ಸ್ವಾಮಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಉಮೇಶ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಬಿ.ಎನ್.ಸ್ವಾಮಿ ನಾಮಪತ್ರ ಸಲ್ಲಿಸಿದ್ದು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ.ವಿಜಯೇಂದ್ರ ಅವರು ಸ್ವಾಮಿ ಅವರನ್ನೇ ಅವಿರೋಧವಾಗಿ ಘೋಷಿಸಿದರು.

ನೂತನ ಅಧ್ಯಕ್ಷರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿ ಮಾತನಾಡಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಎನ್.ಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿ ಕಲಸಿಂದ ಸೊಸೈಟಿ ಮೂಲಕ ಈ ಭಾಗದ 800 ಮಂದಿಗೆ ೩ಕೋಟಿ 26 ಲಕ್ಷ ರೂ. ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಣೆ ಮಾಡಲಾಗಿದೆ ಎಂದರು.

ಜಿಲ್ಲಾ ಬ್ಯಾಂಕ್ ಸಹಕಾರ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ ಜಿಲ್ಲೆಯ 1.60 ಲಕ್ಷ ಸಾವಿರ ರೈತರಿಗೆ ಸಾಲ ನೀಡುವ ಮೂಲಕ ನೆರವಿಗೆ ಮುಂದಾಗಿದೆ. ಇದಕ್ಕೆ ಕಾರಣಿಕರ್ತರು ಮಾಜಿ ಪ್ರಧಾನಿ ದೇವೆಗೌಡರು ಎಂದು ತಿಳಿಸಿದರು.

ಪೈಲೆಟ್ ಯೋಜನೆ ಮೂಲಕ 2 ಕೋಟಿ ರೂ. ಪ್ರೋತ್ಸಾಹ ನಿಧಿ ನೀಡಿ ಬ್ಯಾಂಕ್‌ನ ಪುನಶ್ಚೇತನಕ್ಕೆ ಮುಂದಾದರು. ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ 2 ಬಾರಿ ರೈತರ ಸಾಲಮನ್ನಾ ಮಾಡಿದರು ಎಂದರು.

ರಾಜ್ಯದಲ್ಲಿ 3800 ಕೋಟಿ ಹಣವನ್ನು ಏಕಕಾಲಕ್ಕೆ ತುಂಬಿದ ಹಿನ್ನಲೆಯಲ್ಲಿ 12 ಜಿಲ್ಲಾ ಬ್ಯಾಂಕ್‌ಗಳು ಲಾಭಗಳಿಸಲು ಕಾರಣವಾಯಿತ್ತು.
ಜಿಲ್ಲಾ ಬ್ಯಾಂಕ್‌ನ ಅಧ್ಯಕ್ಷನಾಗಿ, ನಿರ್ದೇಶಕನಾಗಿ ತಾಲ್ಲೂಕಿನಲ್ಲಿ 385 ಕೋಟಿ ಸಾಲ ನೀಡಲಾಗಿದೆ. ಇದರಿಂದ 50 ಸಾವಿರ ರೈತರ ಇದರ ಉಪಯೋಗ ಪಡೆದಿದ್ದಾರೆ ಎಂದರು.

ನೂತನ ಅಧ್ಯಕ್ಷ ಬಿ.ಎನ್.ಸ್ವಾಮಿ ಮಾತನಾಡಿ, ಶಾಸಕರ ಸಹಕಾರದಿಂದ ಕೃಷಿ ಪತ್ತಿನ ಶೇರುದಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಅವರ ಸಲಹೆ ಸಹಕಾರ ಮಾರ್ಗದರ್ಶನದಲ್ಲಿ ಎಲ್ಲಾ ಸದಸ್ಯರ ಒಮ್ಮತದಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು.

ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಜಯಲಕ್ಷ್ಮಿ, ನಿರ್ದೇಶಕರಾದ ಶಿವರಾಜ್, ಕೃಷ್ಣಮೂರ್ತಿ, ತಿಮ್ಮೇಗೌಡ, ಜಿ.ಆರ್.ಉಮೇಶ್, ಮೋಹನ್‌ಕುಮಾರ್, ಜಿ.ಎಲ್.ನಾಗೇಶ್, ರತ್ನ, ಹರೀಶ್, ಮುನಿಸ್ವಾಮಿ, ನಾಗಯ್ಯ, ಮುಖಂಡರಾದ ದಿಂಡಗೂರು ಗೋವಿಂದ್‌ರಾಜ್, ಅಣ್ಣೇಗೌಡರು, ಕೆರೆಚಿಕ್ಕೇನಹಳ್ಳಿ ಸ್ವಾಮಿ, ರಾಜು, ಸೇರಿ ಕೃಷಿ ಪತ್ತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಎಸ್.ಮಂಜೇಗೌಡ, ಗುಮಾಸ್ತ ರಂಗಸ್ವಾಮಿ, ಸಿಬ್ಬಂದಿ ಹಾಗೂ ಇತರರು ಇದ್ದರು.