ಹಾಸನ: ಅರಕಲಗೂಡು ತಾಲ್ಲೂಕಿನ ಸುಳುಗೋಡು ಸೋಮವಾರ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ಉಳುಮ ವೇಳೆ ಜೈನ ತೀರ್ಥಂಕರರ ವಿಗ್ರಹ ಹಾಗೂ ಕೆತ್ತನೆಯುಳ್ಳ ಕಲ್ಲಿನ ಪುರಾತನ ಸ್ತಂಭ ಪತ್ತೆಯಾಗಿವೆ.
ಮಂಜು ಎಂಬ ರೈತ ನಿನ್ನೆ ಬೆಳಿಗ್ಗೆ ಟ್ರಾಕ್ಟರ್ ಬಳಸಿ ಉಳುಮೆ ಮಾಡುವಾಗ ಈ ಕಲಾಕೃತಿಗಳು ನೆಲದಡಿಯಿಂದ ಹೊರಬಂದವು. ಮಂಜು ಹಾಗೂ ಸ್ಥಳೀಯ ಗ್ರಾಮಸ್ಥರು ಈ ವಿಷಯವನ್ನು ತಕ್ಷಣ ಪುರಾತತ್ವ ಇಲಾಖೆಗೆ ತಿಳಿಸಿದ್ದಾರೆ. ಪತ್ತೆಯಾದ ಕಲಾಕೃತಿಗಳು ತೀರ್ಥಂಕರರ ವಿಗ್ರಹ ಮತ್ತು ಸ್ತಂಭದ ಶಿಲ್ಪಗಳನ್ನು ಹೊಂದಿದ್ದು, ಅವು ಪುರಾತನ ಕಾಲಕ್ಕೆ ಸೇರಿದವು ಎಂದು ಊಹಿಸಲಾಗಿದೆ.
ಗ್ರಾಮದ ಐತಿಹಾಸಿಕ ಮಹತ್ವ:
ಈ ಗ್ರಾಮದಲ್ಲಿ ಈ ಮೊದಲು ಕೂಡಾ ಭೂಮಿಯಿಂದ ಪುರಾತನ ಕಾಲದ ವಿಗ್ರಹ, ಕೆತ್ತನೆಗಳು ಪತ್ತೆಯಾಗಿದ್ದವು. ಇದರಿಂದಾಗಿ ಗ್ರಾಮ ಐತಿಹಾಸಿಕವಾಗಿ ಬಹುಮುಖ್ಯತೆ ಹೊಂದಿರುವ ಸ್ಥಳವಾಗಿರಬಹುದೆಂಬ ಊಹಿಸಲಾಗುತ್ತಿದೆ.
ಪುರಾತತ್ವ ಇಲಾಖೆ ಪರಿಶೀಲನೆ ಪ್ರಾರಂಭ:
ಘಟನೆಯ ಬಗ್ಗೆ ಪುರಾತತ್ವ ಇಲಾಖೆ ತಕ್ಷಣವಾಗಿ ಪರಿಶೀಲನೆ ಪ್ರಾರಂಭಿಸಿದ್ದು, ಇನ್ನೂ ಹೆಚ್ಚಿನ ಪುರಾತನ ಕಾಲದ ಅವಶೇಷಗಳು ಈ ಪ್ರದೇಶದಲ್ಲಿ ಇರಬಹುದು ಎಂಬ ನಿರೀಕ್ಷೆಯಿದೆ.