ಹಾಸನ: ಬೆಂಕಿ ಹೊತ್ತಿ ಉರಿಯುತ್ತಿದ್ದ ಹುಲ್ಲಿನ ಕಂತೆ ಮೈಮೇಲೆ ಬಿದ್ದು ಯುವಕ ಸಾವು!

ಹಾಸನ: ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿದ್ದ ಹುಲ್ಲಿನ ಕಂತೆಗಳಿಗೆ ಹೊತ್ತಿಕೊಂಡ ಆಕಸ್ಮಿಕ ಬೆಂಕಿಯಿಂದ ಟ್ರ್ಯಾಲಿಯನ್ನು ರಕ್ಷಿಸುವ ಯತ್ನದಲ್ಲಿ ಹೊತ್ತಿ ಉರಿಯುತ್ತಿದ್ದ ಹುಲ್ಲಿನ ಕಂತೆ ಮೈಮೇಲೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ  ಆಲೂರು ತಾಲ್ಲೂಕಿನ ಕಿರಗಡಲು ಗ್ರಾಮದ ಬಳಿ ನಡೆದಿದೆ.

ದುರಂತದಲ್ಲಿ ರಂಗಸ್ವಾಮಿ ಅಲಿಯಾಸ್ ಪಾಪಣ್ಣಿ (40) ಎಂಬ ರೈತ ಮೃತರಾಗಿದ್ದಾರೆ.

ಮೃತಪಟ್ಟ ರಂಗಸ್ವಾಮಿ

ಘಟನೆ ವಿವರ:

ರಂಗಸ್ವಾಮಿ, ಹೊಳೆನರಸೀಪುರ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದವರು, ತಮ್ಮ ಸ್ನೇಹಿತ ಕಿರಣ್ ಜೊತೆ ಹಾಸನ ಜಿಲ್ಲೆಯ ಕಿರಗಡಲು ಗ್ರಾಮದಲ್ಲಿ ಟ್ರ್ಯಾಕ್ಟರ್‌ಗೆ ಹುಲ್ಲು ತುಂಬಿಸುವ ಕೆಲಸಕ್ಕೆ ತೆರಳಿದ್ದರು.

  • ಹುಲ್ಲು ತುಂಬಿಸಿಕೊಂಡು ಗ್ರಾಮ ಹತ್ತಿರಕ್ಕೆ ಬಂದ ಸಂದರ್ಭ, ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ.
  • ಬೆಂಕಿ ಕಾಣುತ್ತಿದ್ದಂತೆ, ಟ್ರ್ಯಾಕ್ಟರ್ ನಿಲ್ಲಿಸಿ ಇಬ್ಬರೂ ಕೆಳಗಿಳಿದರು.
  • ಹುಲ್ಲು ಕಟ್ಟಿ ಹೊಂದಿಸಿದ್ದ ಹಗ್ಗವನ್ನು ಬಿಚ್ಚುವ ವೇಳೆ, ಟ್ರ್ಯಾಕ್ಟರ್‌ನ ಟ್ರಾಲಿಯಿಂದ ಕಿರಣ್ ಏಕಾಏಕಿ ಹುಲ್ಲು ಸುರಿದನು.
  • ಹೊತ್ತಿ ಉರಿಯುತ್ತಿದ್ದ ಹುಲ್ಲು ಬೆಂಕಿ ಉಂಡೆಯಾಗಿ ರಂಗಸ್ವಾಮಿ ಮೇಲೆ ಬಿದ್ದಿದೆ.
  • ಗಂಭೀರ ಸುಟ್ಟ ಗಾಯಗಳಿಂದ ತೀವ್ರವಾಗಿ ಗಾಯಗೊಂಡ ರಂಗಸ್ವಾಮಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.
  • ಚಿಕಿತ್ಸೆಗೆ ಸ್ಪಂದಿಸದೆ, ಅವರು ಅಲ್ಲಿ ಸಾವನ್ನಪ್ಪಿದರು.

ಈ ಘಟನೆ ಕುರಿತು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ